
ಯೋಚಿಸಿ ಕೆಡಬೇಡ
ನಿಚ್ಚ ನೆನೆಯೊ ನಮ್ಮಚ್ಯುತನಾಮವ
ಮೆಚ್ಚಿ ಕೊಟ್ಟರೆ ಅಚ್ಯುತ ಪದವೀವ
ಹರಿಹರಿಯೆಂದೊದರೋ ಹತ್ತಿದ
ದುರಿತಗಳಿಗೆ ಬೆದರೋ
ವಾರಿಜಾಕ್ಷನ ವೈಕುಂಠಪುರವ
ಸೇರಿ ಸೇರಿ ನೀ ಕುಣಿಕುಣಿದಾಡೊ
ಆರ ಗೊಡವೆ ಏಕೋ ನರಕದ
ದಾರಿ ತಪ್ಪಿಸುವರೇನೋ
ನೀರಜಾಕ್ಷ ನಮ್ಮ ನಿರ್ಜರಪತಿಯಲಿ
ಸೇರಿ ಸೇರಿ ಮನ ನಲಿನಲಿದಾಡೊ
ಭಕ್ತಜನರ ಕೂಡೋ ಭವಭಯ
ಬತ್ತಿಪೋಪುದು ನೋಡೋ
ಮುಕ್ತಿದಾಯಕ ಶ್ರೀಪುರಂದರವಿಠಲನ
ಭಕ್ತಿಯಿಂದ ನೀ ಹಾಡಿ ಕೊಂಡಾಡೊ
No comments:
Post a Comment