ನಾಮಕೀರ್ತನೆ ಅನುದಿನ ಮಾಳ್ಪಗೆ ನರಕ ಭಯಗಳುಂಟೆ

ನಾಮಕೀರ್ತನೆ ಅನುದಿನ ಮಾಳ್ಪಗೆ ನರಕ ಭಯಗಳುಂಟೆ

ನಾಮವೊಂದೆ ಯಮನಾಳ್ಗಳನೊದೆದು,
                                      ಅಜಾಮಿಳನಿಗೆ ಸುಕ್ಷೇಮವಿತ್ತ ಹರಿ


ಕೇಸರಿಗಂಜದ ಮೃಗವುಂಟೆ ದಿ-
ನೇಶನಿಗಂಜದ ತಮವುಂಟೆ
ವಾಸುದೇವ ವೈಕುಂಠ ಜಗನ್ಮಯ
ಕೇಶವ ಕೃಷ್ಣಾ ಎಂದುಚ್ಚರಿಸುತ


ಕುಲಿಶಕ್ಕೆದುರಿಹ ಗಿರಿಯುಂಟೆ ಬಲು
ಪ್ರಳಯ ಬಂದಾಗ ಜೀವಿಪರುಂಟೆ
ಜಲಜನಾಭ ಗೋವಿಂದ ಜನಾರ್ದನ
ಕಲುಷಹರಣ ಕರಿರಾಜ ವರದನೆಂದು


ಗರುಡನಿಗಂಜದ ಫಣಿಯುಂಟೆ ದ-
ಳ್ಳುರಿಯಲಿ ಬೇಯದ ತೃಣವುಂಟೆ
ನರಹರಿ ನಾರಾಯಣ ದಾಮೋದರ
ಪುರಂದರವಿಠಲ ಎಂದುಚ್ಚರಿಸುತ

No comments: