ಈಗ ಮಾಡಲೊ ರಾವಧ್ಯಾನವ ನೀ


ಈಗ ಮಾಡಲೊ ರಾವಧ್ಯಾನವ ನೀ
ಮೂಗನಾಗಿರಬೇಡ ಎಲೆ ಮಾನವ

ಕಾಲನ ದೂತರು ಕರೆವಾಗ ನೀ
ಕುಲಗೆಟ್ಟು ಕಣ್ಣು ಬಿಡುವಾಗ
ನಾಲಿಗೆ ಸೆಳಕೊಂಡು ಜ್ಞಾನಗೆಟ್ಟಿರುವಾಗ
ನೀಲವರ್ಣನ ಧ್ಯಾನ ಬರುವುದೇನಯ್ಯ

ಸತಿಸುತರೆಂಬ ಸಂದಣಿಯೊಳು ನೀ
ಮತಿಭ್ರಷ್ಟನಾಗಿ ಮನದೊಳು
ಸತತ ಶ್ರೀ ಲಕ್ಷ್ಮೀಪತಿಯ ನೆನೆದರೆ ಸ-
ದ್ಗತಿ ಸನ್ಮಾರ್ಗ ಪಾರಂಪದವೀವನಯ್ಯ

ಯಮದೂತರು ಬಂದು ಎಳೆದಾಗ ನೀ
ನವೆಯುತ್ತ ಹೊತ್ತು ಕಳೆವಾಗ
ಸಮದರ್ಶಿ ಪುರಂದರವಿಠಲನ ನಾಮವಾ
ಸಮಯಕ್ಕೆ ಒದಗಿ ತಾ ಬರುವುದೇನಯ್ಯ

No comments: