ತುಂಗೆ ಮಂಗಳ ತರಂಗೆ

ತುಂಗೆ ಮಂಗಳ ತರಂಗೆ

ಹರಿಸರ್ವಾಂಗ ಜಯ ಜಯತು ಜಯ ಜಯ ತುಂಗಭದ್ರೆ

ಆದಿಯಲ್ಲೊಬ್ಬ ದೈತ್ಯ ಮೇದಿನಿಯ ಕದ್ದೊಯ್ದು
ಸಾಧಿಸುತ್ತಿರಲವನ ಬೆನ್ನಟ್ಟಿ ಬಿಡದೆ
ಛೇದಿಸುತಲವನ ಭೂಮಿಯನೆತ್ತಿ ಕಾಯ್ದಂಥ
ಆದಿವರಾಹನ ದಾಡೆಗಳಿಂದ ಬಂದೆ

ಜಲವೆಲ್ಲ ಹರಿಮಯ ಶಿಲೆಯಲ್ಲ ಶಿವಮಯ
ಮಳಲು ಮಿಟ್ಟೆಗಳೆಲ್ಲ ಮಣಿಯ ಮಯವು
ಬೆಳೆದಿಪ್ಪ ದರ್ಭೆಗಳು ಸಾಕ್ಷಾತ್ತು ಬ್ರಹ್ಮಮಯ
ನಳಿನ ನಾಳವು ಸರ್ವ ವಿಷ್ಣುಮಯ

ಇದೆ ವೃಂದಾವನ ಇದೆ ಕ್ಷೀರಾಂಬುಧಿ
ಇದೆ ವೈಕುಂಠಕೆ ಸರಿಯೆಂದೆನಿಸಿದೆ
ಇದೆ ಬದರಿಕಾಶ್ರಮ ಇದೆ ವಾರಾಣಾಸಿಗೆ
ಅಧಿಕ ಫಲವನ್ನೀವ ದೇವಿ

ಧರೆಗೆ ದಕ್ಷಿಣ ವಾರಾಣಾಸಿ ಎಂದೆನಿಸಿದೆ
ಪರಮ ಪವಿತ್ರೆ ಪಾವನ ಚರಿತೆ ನಿನ್ನ
ಸ್ವರಣೆ ಮಾತ್ರದಿ ಕೋಟಿಜನ್ಮದಘವನು ಕಳೆವ
ಸರಿದು ಸಾಯುಜ್ಯ ಫಲವೀವ ದೇವಿ

ಪರಮ ಭಕ್ತ ಪ್ರಹ್ಲಾದಗೊಲಿದು ಬಂದು
ನರಸಿಂಹ ಕ್ಷೇತ್ರವೆಂದೆನಿಸಿ ಮೆರೆದೆ
ಧರೆಯೊಳಧಿಕ ವರ ಕೊಡಲಿಪುರದಲ್ಲಿ
ವರದ ಪುರಂದರವಿಠಲನಿರಲು ಬಂದೆ

ಯುಟ್ಯೂಬ್ ನಲ್ಲಿ ನೋಡಲು/ಕೇಳಲು ಇಲ್ಲಿ ಕ್ಲಿಕ್ ಮಾಡಿ

No comments: