ದಾನವನ ಕೊಂದದ್ದಲ್ಲ ಕಾಣಿರೊ

ದಾನವನ ಕೊಂದದ್ದಲ್ಲ ಕಾಣಿರೊ
ಗಾನ ವಿನೋದಿ ನಮ್ಮ ತೊರವೆಯ ನರಸಿಂಹ

ಅಚ್ಚಪುರುಷನೆಂಬ ಸ್ವಚ್ಛರತ್ನ ಒಡಲೊಳು
ಬಿಚ್ಚಿ  ಬೆದಕಿ ನೋಡಿದರೆ ಇನ್ನೆಷ್ಟು ಇದ್ದಾವೊ ಎಂದು

ನೆಂಟತನವು ಬೆಳೆಯಬೇಕೆಂದು ಕರುಳ ಕೊರಳೊಳು
ಗಂಟು ಹಾಕಿಕೊಂಡನೆಷ್ಟೊ ದೇಹ ಸಂಬಂಧದಿಂದ

ತೊರವೆಯ ನಾರಸಿಂಹ ಪ್ರಹ್ಲಾದ ಪಾಲಕ
ಉರಿಮೋರೆ ದೈವ ನಮ್ಮ ಪುರಂದರವಿಠಲ


ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

No comments: