ಏಕೆ ಚಿಂತಿಸುವೆ ಬರಿದೆ ಮರುಳೆ

ಏಕೆ ಚಿಂತಿಸುವೆ ಬರಿದೆ ಮರುಳೆ 
ವಿಧಿ ಬರೆದ ವಾಕು ತಪ್ಪದು 
ಎಂದಿಗೂ ಮರುಳೆ 

ಹುಟ್ಟುವುದಕಿಂತ ಮೊದಲೆ ತಾಯ ಸ್ತನ 
ದಿಟ್ಟ ಕ್ಷೀರವನು ಉಂಡು 
ತೊಟ್ಟಿಲೊಳು ಮಲಗುವಾಗ ಗಳಿಸಿ ತಂ-
ದಿಟ್ಟು ನೀನುಣುತಿದ್ದೆಯೊ ಮರುಳೆ 

ಉರಗ ವೃಶ್ಚಿಕ ಪಾವಕ ಕರಿ ನಂಜು 
ಅರಸು ಹುಲಿ ಚೊರಭಯವು 
ಹರಿಯಾಜ್ಞೆಯಿಂದಲೇನೆ ನೀನು ಮಹಾ 
ಶರಧಿ ಪೋಕ್ಕರು ಬಿಡದು ಮರುಳೆ 

ಇಂತು ಸುಖದುಃಖಂಗಳಿಗೆ ಸಿಲುಕಿ ನೀ 
ಭ್ರಾಂತನಾಗಿ ಕೆಡಲು ಬೇಡ 
ಸಂತೋಷದಿಂದರ್ಚಿಸಿ ಪೂಜಿಸು 
ಕಂತುಪಿತ ಶ್ರೀಪುರಂದರವಿಠಲನ 

No comments: